‘ನಂದೀಶ’ ಕೋಮಲ್ ಕುಮಾರ್ ಅವರ ಸ್ವಂತ ಬ್ಯಾನರ್ ಅಡಿಯಲ್ಲಿ ತಯಾರಗುತ್ತಿರುವ ಮೂರನೇ ಚಿತ್ರ ಮಾತುಗಳ ಚಿತ್ರೀಕರಣ ಸಂಪೂರ್ಣ ಮುಗಿಸಿ ಇದೀಗ ರೇ-ರೆಕಾರ್ಡಿಂಗ್ ಹಂತವನ್ನು ತಲುಪಿರುವ ಚಿತ್ರ ಸದ್ಯದಲ್ಲೇ ಹಾಡುಗಳ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಬೆಂಗಳೂರಿನ ಸ್ಕೈಲೈನ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಸಹ ಸಂಪೂರ್ಣವಾಗಿದ್ದು ‘ನಂದೀಶ’ ಹಾಡುಗಳಲ್ಲಿ ನಲಿದಾಡುವುದೊಂದೇ ಬಾಕಿ ಉಳಿದಿದೆ ಎಂದು ಕೋಮಲ್ ಕುಮಾರ್ ಅವರು ಸಂತೋಷದಲ್ಲಿ ಇದ್ದಾರೆ.
ಊಟಿ ಅಲ್ಲಿ ೨೫ ದಿವಸಗಳ ಅಂತಿಮ ಹಂತದ ’ನಂದೀಶ’ ಚಿತ್ರೀಕರಣ ಜರುಗಿದೆ. ಪರುಲ್ ಅವರು ’ಗೋವಿಂದಯನಾಮಹ’ ಚಿತ್ರದಲ್ಲಿ ಪ್ಯಾರ್ ಗೆ ಅಗ್ಬುತ್ತೈತೆ...ನಮ್ಧುಕೆ ಜಾಂಗೆ ಹೊಗ್ಬಿತ್ತೈತೆ... ಎಂಬ ಹಾಡಿನಲ್ಲಿ ಕೋಮಲ್ ಕುಮಾರ ಅವರ ಜೊತೆ ಸೇರಿಕೊಂಡು ಪ್ರೇಕ್ಷಕರ ಹುಚ್ಚು ಹಿಡಿಸಿದ್ದು ನಿಮಗೆಲ್ಲ ತಿಳಿದೇ ಇದೆ. ಈಗ ಈ ’ನಂದೀಶ’ ಚಿತ್ರದಲ್ಲಿ ಅದೇ ಜೋಡಿ ಎಂತಹ ಮೋಡಿ ಮಾಡಲಿದೆ ಎಂದು ಕಾದು ನೋಡಬೇಕಿದೆ. ಗೋಕಾಕ್, ರಾಮನಗರ, ಬಾಗಲ್ಕೋಟೆ, ಊಟಿ ಹಾಗೂ ಇನ್ನಿತರ ತಾಣಗಳಲ್ಲಿ ಹಿರಿಯ ನಿರ್ದೇಶಕ ಸಾಯಿ ಪ್ರಕಾಷ್ ಅವರು ತಮ್ಮ ೯೫ ನೇ ಚಿತ್ರ ’ನಂದೀಶ’ ಚಿತ್ರಕ್ಕೆ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಮುರುಗನ್ ಹಾಗೂ ಸ್ನೇಹಿತರು ಈ ಚಿತ್ರದ ಚಿತ್ರ ಕಥೆಗೆ ಸಹಾಯ ಹಸ್ತ ನೀಡಿದ್ದಾರೆ. ಕೋಮಲ್ ಕುಮಾರ್ ಹಾಗೂ ಅನಸೂಯ ಕೋಮಲ್ ಕುಮಾರ್ ಅವರು ನಿರ್ಮಾಣ ಮಾಡುತ್ತಿರುವ ಮೂರನೇ ಚಿತ್ರ ಈ ನಂದೀಶ. ಈ ಹಿಂದೆ ’ಚಂಕಾಯಿಸಿ ಚಿಂದಿ ಉಡಾಯಿಸಿ’ ಹಾಗೂ ’ಕಳ್ ಮಂಜ’ ನಿರ್ಮಾಣ ಮಾಡಿದ ಅನುಭವ ಇರುವ ಕೊಮಾಲ್ಕುಮಾರ್ ದಂಪತಿಗೆ ಇದೆ. ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ ಇರುವ ’ನಂದೀಶ’ ಹಾಡುಗಳಲ್ಲೂ ಈಗಾಗಲೇ ಸದ್ದು ಮಾಡಲು ಶುರು ಇಟ್ಟುಕೊಂಡಿದೆ.
ಮಲಯಾಳಂ ಮೂಲದ ಮಾಳವಿಕ ಸಹ ಚಿತ್ರದ ಮತ್ತೊಂದು ನಾಯಕಿ. ಶ್ರೀನಿವಾಸಮೂರ್ತಿ, ರಮೇಶ್ ಭಟ್ ಹಾಗೂ ಇನ್ನಿತರರು ತರಗಣದಲ್ಲಿದ್ದಾರೆ. ಸೇಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.